ಆರಿಗಿಲ್ಲ
ಆಪತ್ಕಾಲದೊಳಗೆ || ಪ ||
ವಾರಿಜಾಕ್ಷನ
ನಾಮ ನೆನೆ ಕಂಡ್ಯ ಮನವೆ || ಅ.ಪ ||
ಹಸಿದು ಬಳಲುವಾಗ ಹಗೆ ಕೈಗೆ
ಸಿಲುಕಿದಾಗ
ದೆಸೆಗೆಟ್ಟು ಅಧಿಕ
ವ್ಯಾಧಿಯಲಿ ಇರುವಾಗ
ಅಸಮಾನನಾದಾಗ ಅತಿ
ಭೀತಿಗೊಂಡಾಗ
ಬಿಸಜನಾಭನ
ನಾಮ ನೆನೆಕಂಡ್ಯ ಮನವೆ || ೧ ||
ಸಾಲದವರೆಳೆವಾಗ ಚಾಡಿ
ಮಾತಿಗೆ ಭೂಪ
ಘುಳುಘುಳಿಸುತ ಕೋಪವನ್ನು
ತೋರಿದಾಗ
ಮೇಲು ತಾನರಿಯದಯೆ ನಿಂದೆ
ಹೊಂದಿರುವಾಗ
ನೀಲಮೇಘಶ್ಯಾಮನ
ನೆನೆಕಂಡ್ಯ ಮನವೆ || ೨ ||
ಪಂಥದಲಿರುವಾಗ ಪದವಿ
ತಪ್ಪಿರುವಾಗ
ದಂತಿ ಮದವೇರಿ
ಬೆನ್ಹತ್ತಿದಾಗ
ಕಂತುಪಿತಕಾಗಿನೆಲೆಯಾದಿಕೇಶವ
ನಿ
ಶ್ಚಿಂತೆಯಿಂದಲಿ
ನೀನು ನೆನೆಕಂಡ್ಯ ಮನವೆ || ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment