Monday, July 10, 2017

ಮಧ್ವನಾಮ

ತಂ ವಂದೇ ನರಸಿಂಹ ತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ |
ಧ್ಯಾಯಂತಂ ಮನಸಾ ನರಸಿಂಹಚರಣಂ ಶ್ರೀಪಾದರಾಜಂ ಗುರುಂ ||

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ ()

ಆವ ಕಚ್ಚಪರೂಪದಿಂದ ಲಂಡೊದಕವ 
ಓವಿ ಧರಿಸಿದಶೇಷ ಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೈದುವರು
 ವಾಯು ನಮ್ಮ ಕುಲ ಗುರುರಾಯನು ||  ||

ಜಯ ಜಯ ಜಗತ್ರಾಣ... ()

ಆವವನು ದೇಹದೊಳಗಿರಲು ಹರಿ ನೆಲೆಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳಹೊರಗೆ ನಿಯಾಮಕನು
 ವಾಯು ನಮ್ಮ ಕುಲಗುರುರಾಯನು ||  ||

ಜಯ ಜಯ ಜಗತ್ರಾಣ... ()

ಕರಣಾಭಿಮಾನಿ ಸುರರು ದೇಹವಾ ಬಿಡಲು
ಕುರುಡ ಕಿವುಡಾ ಮೂಕನೆಂದೆನಿಸುವಾ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೆಳುವರು ಬುಧಜನ ||  ||

ಜಯ ಜಯ ಜಗತ್ರಾಣ... ()

ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ 
ಪರತರನೆನಿಸಿ ನಿಯಾಮಿಸಿ ನೆಲೆಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೊಕದೊಳು
ಗುರುಕುಲ ತಿಲಕ ಮುಖ್ಯ ಪವಮಾನನು ||  ||

ಜಯ ಜಯ ಜಗತ್ರಾಣ... ()

ತ್ರೇತೆಯಲಿ ರಘುಪತಿಯ ಸೆವೆಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೊಕದೊಳಗೆ ||  ||

ಜಯ ಜಯ ಜಗತ್ರಾಣ... ()

ತರಣಿಗಭಿಮುಖವಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದುಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ ||  ||

ಜಯ ಜಯ ಜಗತ್ರಾಣ... ()

ಅಖಿಲ ವೇದಗಳ ಸಾರ ಪಠಿಸಿದನು ಮುನ್ನಲ್ಲಿ
ನಿಖಿಲ ವ್ಯಾಕರಣಗಳ ಇವ ಪಠಿಸಿದ
ಮುಖದಲ್ಲಿ ಕಂಚಿದಪಶಬ್ದ ಇವಗಿಲ್ಲವೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ||  ||

ಜಯ ಜಯ ಜಗತ್ರಾಣ... ()

ತರಣಿ ಸುತನನು ಕಾಯ್ದು ಶರಧಿಯನು ನೆರೆ ದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಗೆ ಬಂದ ಹನುಮಂತನು ||  ||

ಜಯ ಜಯ ಜಗತ್ರಾಣ... ()

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು 
ಒರೆಸಿ ರಣದಲ್ಲಿ ದಶಶಿರನ ಹುಡಿಗುಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರಾ ||  ||

ಜಯ ಜಯ ಜಗತ್ರಾಣ... ()

ಉರಗ ಬಂಧಕ್ಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯನೆ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ || ೧೦ ||

ಜಯ ಜಯ ಜಗತ್ರಾಣ... ()

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ || ೧೧ ||

ಜಯ ಜಯ ಜಗತ್ರಾಣ... ()

 ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮವಿಕ್ರಮ ರಕ್ಕಸರ ಮುರಿದು ಅಟ್ಟಿದ
 ಮಹಿಮ ನಮ್ಮ ಕುಲ ಗುರುರಾಯನು || ೧೨ ||

ಜಯ ಜಯ ಜಗತ್ರಾಣ... ()

ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೊಡೆದು ಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ 
ಅರೆವ ವೀರನಿಗೆ ಸುರನರರು ಸರಿಯೆ || ೧೩ ||

ಜಯ ಜಯ ಜಗತ್ರಾಣ... ()

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆರಗನದನೊರಸಿದ
ಅರಗಿನಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ || ೧೪ ||

ಜಯ ಜಯ ಜಗತ್ರಾಣ... ()

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರೆಸಿದ ಲೋಕಕಂಟಕರನು
ಬಲ್ಲಿದಸುರರ ಗಲಿದು ದ್ರೌಪದಿಯ ಕೈಪಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ || ೧೫ ||

ಜಯ ಜಯ ಜಗತ್ರಾಣ... ()

ರಾಜಕುಲವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಾಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ || ೧೬ ||

ಜಯ ಜಯ ಜಗತ್ರಾಣ... ()

ಕಾನನವ ಪೊಕ್ಕು ಕಿಮ್ಮೀರಾದಿಗಳ ಮುರಿದು
ದಾನವರ ಸವರಬೇಕೆಂದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ಮಾನಿನಿಗೆ ಸೌಗಂಧಿಕವನೆ ತಂದ || ೧೭ ||

ಜಯ ಜಯ ಜಗತ್ರಾಣ... ()

ದುರುಳಕೀಚಕನು ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನ
ಗರಡಿಮನೆಯಲ್ಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲ ಕುಲವ ಸದೆದ ||  ೧೮ ||

ಜಯ ಜಯ ಜಗತ್ರಾಣ... ()

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವರ ಮುರಿದು ಮೆರೆದ
ವೈರಿ ದುಶ್ಯಾಸನನ ರಣದಲ್ಲಿ ಎದೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ || ೧೯ ||

ಜಯ ಜಯ ಜಗತ್ರಾಣ... ()

ಗುರುಸುತನು ಸಂಗರದಿ ನಾರಾಯಣಾಸ್ತ್ರವನು 
ಉರವಣಿಸಿ ಬಿಡಲು ಶಸ್ತ್ರವ ಬಿಸುಟದೆ 
ಹರಿಯ ಕೃಪೆ ಪಡೆದಿದ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ || ೨೦ ||

ಜಯ ಜಯ ಜಗತ್ರಾಣ... ()

ಚಂಡವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು || ೨೧ ||

ಜಯ ಜಯ ಜಗತ್ರಾಣ... ()

ನಾರಿರೋದನ ಕೇಳಿ ಮನಮರುಗಿ ಗುರುಸುತನ 
ಹಾರಿಹಿಡಿದು ಶಿರೋರತ್ನ ಕಿಟ್ಟಿ ತೆಗೆದ
ನೀರೊಳಗಡಗಿದ್ದ ದುರ್ಯೋಧನನ ಹೊರಗೆಡಹಿ
ಉರುಯುಗ ತನ್ನ ಗದೆಯಿಂದ ಮುರಿದ || ೨೨ ||

ಜಯ ಜಯ ಜಗತ್ರಾಣ... ()

ದಾನವರು ಕಲಿಯುಗದೊಳವತರಿಸಿ ವಿಭುದರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಕ್ಯನೆಂದೆನಿಸಿದ || ೨೩ ||

ಜಯ ಜಯ ಜಗತ್ರಾಣ... ()

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲ ಶಾಸ್ತ್ರಗಳ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನು
(ಉರ್ವಿಯೊಳು ಆಮ್ನಾಯ ತತ್ತವದ ಮಾರ್ಗವನು)
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ
(ಸರ್ವ ಸುಜನರ್ಗೆ ಅರುಹಿದನು ಮೋದದಿ) || ೨೪ ||

ಜಯ ಜಯ ಜಗತ್ರಾಣ... ()

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದ
ಶರ್ವಾದಿಗೀರ್ವಾಣಸಂತತಿಯಲಿ || ೨೫ ||

ಜಯ ಜಯ ಜಗತ್ರಾಣ... ()

ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರರಚಿಸಿ 
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
 ಕಮಲನಾಭಾದಿಯತಿಕರಕೊರೆದ || ೨೬ ||

ಜಯ ಜಯ ಜಗತ್ರಾಣ... ()

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಲವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ವೈದಿದ ಮಧ್ವಮುನಿರಾಯಗಭಿವಂದಿಪೆ || ೨೭ ||

ಜಯ ಜಯ ಜಗತ್ರಾಣ... ()

ಜಯಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯಜಯತು ವಾದಿಗಜಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯ ಜಗನ್ನಾಥ ಮಧ್ವನಾಥ || ೨೮ ||

ಜಯ ಜಯ ಜಗತ್ರಾಣ... ()

ತುಂಗಕುಲಗುರುವರನ ಹೃದ್ಕಮಲದಲಿ ನೆಲೆಸಿ
ಭಂಗವಿಲ್ಲದ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ಗುರುಮಧ್ವಾಂತರಾತ್ಮಕ
ರಂಗವಿಠ್ಠಲನೆಂದು ನೆರೆ ಸಾರಿರೈ || ೨೯ ||

ಜಯ ಜಯ ಜಗತ್ರಾಣ... ()

ಸೋಮಸೂರ್ಯೋಪರಾಗದಿ ಗೋ ಸಹಸ್ರಗಳು
ಭೂಮಿದೇವರಿಗೆ ಸುರನದಿ ತೀರದಿ
ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
 ಮಧ್ವನಾಮ ಬರೆದೋದಿದರ್ಗೆ || ೩೦ ||

ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರು ಅಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ || ೩೧ ||

ಶ್ರೀಪಾದರಾಜ ಪೇಳಿದ ಮಧ್ವನಾಮ
ಸಂತಾಪ ಕಳೆದಖಿಲ ಸೌಖ್ಯವನಿಹುವುದು
ಶ್ರೀಪತಿ ಶ್ರೀಜಗನ್ನಾಥವಿಠ್ಠಲನ ತೋರಿ ಭವ
ಕೂಪಾರದಿಂದ ಕಡೆಹಾಯಿಸುವುದು || ೩೨ || 

ಜಯ ಜಯ ಜಗತ್ರಾಣ... ()

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment